ಕೆಮ್ಮಣ್ಣಗುಂಡಿ, ಮುಳ್ಳಯ್ಯನಗಿರಿ, ಬಾಬಾಬುಡನಗಿರಿ...ಸುತ್ತಮುತ್ತಲ ಆ ಹಸಿರು ನಿಶಾನೆ ಕೇವಲ ಸೌಂದರ್ಯ ಆಸ್ವಾದನೆಯ ತಾಣವಷ್ಟೇ ಅಲ್ಲ. ನಿಜಕ್ಕೂ ಅದೊಂದು ಔಷಧ ಭಂಡಾರ! ಹೌದು... ಚಿಕ್ಕಮಂಗಳೂರಿನಿಂದ ಅಂದಾಜು ಐವತ್ತು ಕಿಲೋ ಮೀಟರ್ ವ್ಯಾಪ್ತಿಯೊಳಗಿರುವ ಈ ಪ್ರದೇಶಗಳು ನೂರಾರು ಔಷಧೀಯ ಸಸ್ಯಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಗಿರಿಯ ನೆತ್ತಿಯಲ್ಲಿ ಅರಳಿ ಆಕರ್ಷಿಸುವ ನೂರಾರು ಹೂವುಗಳೂ ಔಷಧೀಯ ಗುಣಗಳನ್ನೇ ಹೊಂದಿವೆ. ಹೊಟ್ಟೆನೋವು, ಮಲಭದ್ದತೆ, ವಾಂತಿ-ಬೇದಿ ಸೇರಿ ಇನ್ನೂ ಕೆಲವು ರೋಗಗಳಿಗೆ ಇದು ಪೇಟೆಂಟ್ ಔಷಧ. ಅದರಲ್ಲೂ ಅದೆಷ್ಟೋ ಹೂವುಗಳು ಉದ್ರೇಕಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದರೆ ಬಹುತೇಕ ಮಂದಿಗೆ ಈ ಬಗ್ಗೆ ಗೊತ್ತೇ ಇಲ್ಲ. ಹೀಗಾಗಿಯೇ ಇಂದು ಇಂತ ಔಷಧೀಯ ಸಸ್ಯಗಳು ನಾಪತ್ತೆಯಾಗುತ್ತಿವೆ. ಹತ್ತಾರು ವರ್ಷ ಮೊದಲು ಸಿಕ್ಕಷ್ಟು ಸುಲಭವಾಗಿ ಇಂದು ಸಿಗಲಾರವು. ಆದರು ನಮ್ಮ ಪ್ರವಾಸದಲ್ಲಿ ಒಂದಿಷ್ಟು ಕಣ್ಣಿಗೆ ಬಿದ್ದಿದ್ದಂತು ಹೌದು. ಇಂತದೇ ಹತ್ತಾರು ಔಷಧೀಯ ಹೂವುಗಳು ಕಣ್ಣಿಗೆ ಬಿದ್ದವು. ಕೆಲವು ಸಸ್ಯಗಳು ಆ ಜಾತಿಗೆ ಸೇರಿದವಾಗಿದ್ದವು.
Subscribe to:
Post Comments (Atom)
No comments:
Post a Comment